Sunday, 7 June 2015


'ಅಕ್ಷಯ ನೇತ್ರ' (ಅಂಧನೊಬ್ಬನ ಆತ್ಮೀಯ ಕತೆ) :
ಮೈಸೂರಿನ ಕಾನೂನು ಪ್ರಾಧ್ಯಾಪಕ ಪ್ರೊ.ಎಂ.ಎಸ್.ವೇಣುಗೋಪಾಲ ಅವರು ಹುಟ್ಟಿನಿಂದ ದೃಷ್ಟಿ ದೋಷವುಳ್ಳವರು. ಆದರೆ ಅವರು ತಮ್ಮ ಬದುಕು ಕಟ್ಟಿಕೊಂಡ ರೀತಿ ಅನನ್ಯ. ಅಲ್ಲಿ ಸೋಲುಗಳಿವೆ. ಅವಮಾನ ಇದೆ. ಆದರೆ ಯಾವುದಕ್ಕೂ ಅಂಜದ ವೇಣೂಜಿ ಸಾಧನೆಯ ಶಿಖರವನ್ನು ಏರಿದ್ದಾರೆ. ಬೇರೆಯವರ ಬಳಿ ಓದಿಸಿಕೊಂಡು, ಪಠ್ಯವನ್ನು ರೆಕಾಡರ್ು ಮಾಡಿಕೊಂಡು ಬಿಎ, ಅರ್ಥಶಾಸ್ತ್ರದಲ್ಲಿ ಎಂಎ, ಇಂಗ್ಲಿಷ್ ಎಂಎ, ಬಿಎಡ್, ಎಂಎಡ್, ಇಂಗ್ಲಿಷ್ ಡಿಪ್ಲೊಮಾ, ಎಲ್ಎಲ್ಬಿ, ಎಲ್ಎಲ್ಎಂ, ಪದವಿ ಪಡೆದುಕೊಂಡಿದ್ದಾರೆ. ಕಾನೂನು ಪಂಡಿತರಾಗಿ, ಕಾನೂನು ಕಾಲೇಜಿನ ಪ್ರಾಧ್ಯಾಪಕರಾಗಿ ಸಾವಿರಾರು ಶಿಷ್ಯರನ್ನು ಬೆಳೆಸಿದ್ದಾರೆ. 70ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ನೂರಾರು ಹಾಡುಗಳನ್ನು ರಚಿಸಿದ್ದಾರೆ. ನಾಟಕಗಳನ್ನು ನಿದರ್ೇಶಿಸಿದ್ದಾರೆ. ಲೀಲಾಜಾಲವಾಗಿ ಈಜುತ್ತಾರೆ. ಸಾಹಸ ಕ್ರೀಡೆಗಳಲ್ಲೂ ಭಾಗಿ. ಬದುಕನ್ನು ಭಾವಗೀತೆಯನ್ನಾಗಿಸಿಕೊಂಡ ಅವರ ಸಾಹಸದ ಕತೆ ಕಣ್ಣು ಇರುವ ಜನರಿಗೂ ದಾರಿದೀಪ. ಅವರ ಬದುಕಿನ ಹಾದಿಯಲ್ಲಿ ಮರುಪಯಣ ಮಾಡಿಸುವ ಪುಸ್ತಕ.

No comments:

Post a Comment