ಕನವರಿಕೆ
ಮಂಡ್ಯ ರಮೇಶನ ಕನವರಿಕೆಗಳಿಗೆ ಎರಡು ಮುಖಗಳು. ಒಂದು: ಮಾಧ್ಯಮಮುಖಿಯಾದದ್ದು. ಇದರಲ್ಲಿ ರಂಗಭೂಮಿ, ನಟನೆ, ಚಲನಚಿತ್ರ, ಕಿರುತೆರೆ, ಭಾಷೆ, ಇತ್ಯಾದಿ ಕುರಿತ ಅನಿಸಿಕೆಗಳಿವೆ. ಎರಡು: ವ್ಯಕ್ತಿಮುಖಿಯಾದದ್ದು, ಇದರಲ್ಲಿ ನಮ್ಮ ನಡುವೆ ಇರುವ, ಇಲ್ಲದಿರುವ ವ್ಯಕ್ತಿಗಳ ವೈಶಿಷ್ಟ್ಯವನ್ನು ಕುರಿತ ಅನಿಸಿಕೆಗಳಿವೆ. ಇವು ಬರಿಯ ಅನಿಸಿಕೆಗಳಾಗದೆ, ಕನವರಿಕೆಗಳಾಗಿ ರೂಪಾಂತರವಾಗಿರುವುದರಿಂದ ಸರೀಕನ ಸ್ವಗತಗಳಂತೆ ಶುರುವಾಗಿ ಅಂತಿಮವಾಗಿ ಜಗುಲಿ ಮೇಲೆ ಹಾಡುತ್ತಾ ಕುಳಿತ ಜನಪದ ಕವಿಯ ಆಲಾಪವಾಗುತ್ತಾ ಹೋಗುತ್ತವೆ. ಉತ್ಪ್ರೇಕ್ಷೆ, ವೈಭವೀಕರಣಗಳು ನುಸುಳಿದರೂ ಅವು ಬರೆಯುವವನ ಲೋಕ ತಬ್ಬುವ ಆದ್ರ್ರತೆಯಿಂದ ಆಪ್ತವಾಗುತ್ತವೆ
No comments:
Post a Comment