ಅನೇಕರು ಶಿಕ್ಷಣ ಪಡೆಯುತ್ತಾರೆ. ಹೊಟ್ಟೆಪಾಡಿಗಾಗಿ ಏನೇನೋ ಮಾಡುತ್ತಾರೆ. ಅತೃಪ್ತ ಸಿರಿವಂತರಿದ್ದಾರೆ; ಸಂತೃಪ್ತ ಬಡವರಿದ್ದಾರೆ. ತಾವು ಸುಖಿಗಳಾಗಬೇಕು ಎಂಬುದೇ ಎಲ್ಲರ ಮೂಲ ಗುರಿ. ಆದರೆ ಎಲ್ಲರೂ ಸುಖಿಗಳಾಗಿರುವುದಿಲ್ಲ ! ಇದಕ್ಕಾಗಿ ಸಮಾಜವನ್ನೋ, ಹಿರಿಯರನ್ನೋ, ದೈವವನ್ನೋ ದೂಷಿಸುವ ಬದಲು ನಮ್ಮ ವ್ಯಕ್ತಿತ್ವವನ್ನು ಪರಿಶೀಲನೆಗೆ ಒಳಪಡಿಸಿ ಪರಿವರ್ತನೆ ತಂದುಕೊಳ್ಳಲು ಸಾಧ್ಯ. ವ್ಯಕ್ತಿತ್ವ ವಿಕಾಸದ ಹಲವಾರು ಮಾರ್ಗಗಳನ್ನು ತೋರಿಸುವ ಈ ಪುಸ್ತಕ ಓದುಗರ ಬದುಕಿನ ಗತಿಯನ್ನೇ ಬದಲಿಸಬಹುದು.
No comments:
Post a Comment